| ನೃತ್ಯಾಂಗನ್ ಸಂಸ್ಥೆಯಿಂದ ಭರತನಾಟ್ಯದ ಪರಿಚಯ Posted: 31 Jul 2017 02:49 AM PDT ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ಶ್ರೀಮತಿ ರಾಧಿಕಾ ಶೆಟ್ಟಿ ಇವರು ಇಂದು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಭರತನಾಟ್ಯದ ಪರಿಚಯವನ್ನು ಮಾಡಿಕೊಟ್ಟರು. ವಿವಿಧ ಮುದ್ರೆಗಳು, ಭಂಗಿಗಳ ಮೂಲಕ ನೃತ್ಯ ಲೋಕದ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿದರು. ರಾಧಿಕಾ ಅವರಿಗೆ ಧನ್ಯವಾದಗಳು...  |
| ಶೇಖರಕಾನಕ್ಕೆ ಪಯಣ Posted: 31 Jul 2017 02:50 AM PDT ಶೇಖರಕಾನ ನಮ್ಮ ಶಾಲೆಯ ವಿದ್ಯಾರ್ಥಿಗಳ ನೆಚ್ಚಿನ ತಾಣ. ಶಾಲೆಯಿಂದ ಅನತಿ ದೂರದಲ್ಲಿರುವ ಈ ಸ್ಥಳದ ಪ್ರವಾಸದ ಫೋಟೋಗಳನ್ನು ಪ್ರದರ್ಶಿಸಲು ನಮಗೆ ಯಾವತ್ತೂ ಸಂತಸವಾಗುತ್ತದೆ. ಮಳೆಗಾಲದಲ್ಲೆಲ್ಲ ನಮ್ಮನ್ನು ಆಕರ್ಷಿಸುವ ಶೇಖರಕಾನ ಜಲಪಾತಕ್ಕೆ ಇಂದೂ ಹೋಗಿ ಬಂದಿದ್ದೇವೆ. ಹೊಸ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿದ್ದೇವೆ.  |
| ತರಕಾರಿ ಬೀಜ ವಿತರಣೆ_2017 Posted: 31 Jul 2017 12:08 AM PDT ಕೇರಳ ಸರಕಾರದ ಕೃಷಿ ಇಲಾಖೆಯು ಕೃಷಿ ಭವನದ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿ ಪ್ರೀತಿಯನ್ನು ಬೆಳೆಸಲು ಕೊಡಮಾಡಿದ ತರಕಾರಿ ಬೀಜಗಳನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯರು ಇಂದು ವಿದ್ಯಾರ್ಥಿಗಳಿಗೆ ವಿತರಿಸಿದರು. ಕೃಷಿ ಪ್ರೀತಿ ಬೆಳೆಯಲಿ...  |
No comments:
Post a Comment