Govt Higher Secondary School Mangalpady

Govt Higher Secondary School Mangalpady


Posted: 05 Mar 2015 10:02 PM PST

ಮಂಗಲ್ಪಾಡಿಯಲ್ಲಿ ಕಾವ್ಯ ಝೇಂಕಾರ

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಕಾವ್ಯಝೇಂಕಾರ ಕಾರ್ಯಕ್ರಮ ಜರಗಿತು. ಹವ್ಯಾಸಿ ಯಕ್ಷಗಾನ ಕಲಾವಿದೆ, ನಿವೃತ್ತ ಕನ್ನಡ ಭಾಷಾ ಅಧ್ಯಾಪಿಕೆ ಜಯಲಕ್ಷ್ಮಿ ಕಾರಂತ ಮತ್ತು ದಿವ್ಯಾ ಕಾರಂತ ಮಂಗಲ್ಪಾಡಿ ತುರಂಗ ಭಾರತದಿಂದ ಆಯ್ದ ಅಭಿಮನ್ಯುವಿನ ಸಾಹಸದ ಕಥಾಮೃತವನ್ನು ಮಧುರವಾಗಿಯೂ ವೈವಿಧ್ಯಮಯವಾಗಿಯೂ ನಡೆಸಿಕೊಟ್ಟರು. ಸಮಾರಂಭವನ್ನು ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ಲು ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ಟ ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮ್ಮರ್ ಅಪೋಲೋ, ಶಾಲಾ ಮುಖ್ಯೋಪಾಧ್ಯಾಯಿನಿ ಲತ ಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ತಾಲ್ಲೂಕು ಘಟಕದ ಅಧ್ಯಕ್ಷ ರಾಘವ ಬಲ್ಲಾಳ್, ಶಾಲಾ ಅಧ್ಯಾಪಕ ಸಂಘದ ಸಂಚಾಲಕ ವಸಂತ ಕುಮಾರ್ ಸಿಕೆ ಶುಭ ಹಾರೈಸಿದರು. ಕನ್ನಡ ಭಾಷಾ ಅಧ್ಯಾಪಿಕೆ ಸುನೀತ ಸ್ವಾಗತಿಸಿ ಸಮಾಜ ವಿಜ್ಞಾನ ಅಧ್ಯಾಪಕ ಉಮೇಶ್ ನಾಯ್ಕ್ ವಂದನಾರ್ಪಣೆಗೈದರು. ಮೂರ್ತಿ ನಾಯ್ಕಾಪು ನಿರೂಪಣೆ ಮಾಡಿದರು.

No comments:

Post a Comment

Previous Page Next Page Home